SIXTH PAY REVISION ARREAR 2016
Posts
Showing posts from July, 2016
- Get link
- Other Apps
READING WEEK INAUGURATION ವ್ಯಾಸಂಗದಿಂದ ಜೀವನ ಅರ್ಥಪೂರ್ಣವಾಗುವುದು : ಶ್ರೀ . ವಿ . ಶ್ರೀನಿವಾಸನ್ ಮಂಗಲ್ಪಾಡಿ : ಜೂನ್ ೨೦ . ಉತ್ತಮ ಪುಸ್ತಕಗಳ ವ್ಯಾಸಂಗದಿಂದ ನಮ್ಮಜೀವನ ಅರ್ಥಪೂರ್ಣವಾಗುವುದು . ಓದುವಿಕೆ ಬದುಕಿಗೆ ಹೊಸ ಆಯಾಮವನ್ನು ಒದಗಿಸುತ್ತದೆ . ಶತಮಾನದ ಹಿಂದೆಯೇ ಜನರಲ್ಲಿ ಓದುವ ಹವ್ಯಾಸವನ್ನು ಹುಟ್ಟಿಸಿ ಅದನ್ನು ಬೆಳೆಸಿದ ಪಿ . ಎನ್ . ಪಣಿಕ್ಕರರ ಜೀವನ ನಮಗೆ ಆದರ್ಶಪ್ರಾಯವಾದುದು . ಅವರು ನಮಗೆ ಮಾದರಿಯಾಗಬೇಕೆಂದು ಚೆಮ್ನಾಡ್ ಶಾಲೆಯ ಅಧ್ಯಾಪಕ , ದೇಶೀಯ ಅಧ್ಯಾಪಕ ಪ್ರಶಸ್ತಿ ಪುರಸ್ಕೃತರಾದ ಶ್ರೀ . ವಿ . ಶ್ರೀನಿವಾಸನ್ ಅಭಿಪ್ರಾಯ ಪಟ್ಟರು . ಅವರು ಮಂಗಲ್ಪಾಡಿ ಸರಕಾರಿ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ನಡೆದ ವಾಚನಾ ಸಪ್ತಾಹ ಹಾಗೂ ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯನ್ನು ಉದ್ಘಾಟಿಸಿ ಮಾತನಾಡಿದರು . ಇದೇ ಸಂದರ್ಭದಲ್ಲಿ ಶಾಲೆಯ ಗ್ರಂಥಾಲಯ ಸದಸ್ಯತನ ವಿತರಣೆಯ ಕಾರ್ಯಕ್ರಮವನ್ನು ಶ್ರೀ . ಕುರಿಯ ವಿಠಲಶಾಸ್ತ್ರಿ ಪ್ರೌಢಶಾಲೆ ಇಲ್ಲಿನ ಕನ್ನಡ ಭಾಷಾ ಅಧ್ಯಾಪಕರಾದ ಶ್ರೀ . ಶ್ರೀಪತಿ ಭಟ್ ಉದ್ಘಾಟಿಸಿ ಮಾತನಾಡಿದರು . ಮಾನ್ಯ ವಿದ್ಯಾಮಂತ್ರಿಯವರ ಸಂದೇಶದ ವಾಚನ ಹಾಗೂ ವಾಚನಾ ದಿನದ ಪ್ರತಿಜೆ಼ಯನ್ನುಸ್ಟಾಫ್ ಸೆಕ್ರೆಟರಿ ಶ್ರೀ . ಪ್ರದೀಪ್ ಕುಮಾರ್ ನಿರ್ವಹಿಸಿದರು . ಕಳೆದ ವರ್ಷ ಗ್ರಂಥಾಲಯದಿಂದ ಅತ್ಯಂತ ಹೆಚ್ಚು ಪುಸ್ತಕಗಳನ್ನುಪಡೆದು ಓದಿದ ನವ್ಯಾಳಿಗೆ ಶಾಲಾ ಮು